ಪಂಚವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ | Information about Five Year Plans in Kannada

Join Telegram Group Join Now
WhatsApp Group Join Now

ಪಂಚವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ Information about Five Year Plans Panchavarshika Yojanegala bagge Mahithi in Kannada

ಪಂಚವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ

Information about Five Year Plans in Kannada
ಪಂಚವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪಂಚವಾರ್ಷಿಕ ಯೋಜನೆಗಳು :

  • ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡ ದೇಶ ರಷ್ಯಾ. ಪ್ರಪಂಚದ ಪಂಚವಾರ್ಷಿಕ ಯೋಜನೆಗಳ ಪಿತಾಮಹಾ – ಸ್ಟಾಲಿನ್.‌
  • ಭಾರತದ ಆರ್ಥಿಕ ಯೋಜನೆಗಳ ಪಿತಾಮಹಾ – ಸರ್.ಎಂ.ವಿಶ್ವೇಶ್ವರಯ್ಯ
  • ಸರ್.ಎಂ.ವಿಶ್ವೇಶ್ವರಯ್ಯನವರು 1934 ರಲ್ಲಿ ಭಾರತದ ಆರ್ಥಿಕತೆಯ ಕೃತಿಯಾದ A Planned Economy for India ಅಥವಾ ಭಾರತದ ಯೋಜಿತ ಅರ್ಥವ್ಯವಸ್ಥೆ ಎಂಬ ಕೃತಿಯನ್ನು ರಚಿಸಿದರು.
  • ಬಾರತದ ಪಂಚವಾರ್ಷಿಕ ಯೋಜನೆಗಳ ಪಿತಾಮಹಾ ಜವಹಾರ್‌ ಲಾಲ್‌ ನೆಹರು.
  • 1943 ರಲ್ಲಿ 8 ಜನ ಕೈಗಾರಿಕೊದ್ಯಮಿಗಳಿಂದ ಸ್ಥಾಪನೆಯಾದ ಬಾಂಬೆ ಯೋಜನೆ ಅಥವಾ ಟಾಟಾ ಯೋಜನೆ.
  • 1944 ರಲ್ಲಿ ನಾರಾಯಣ ಅಗಲವಾಲರವರು ಆರಂಭಿಸಿದ ಯೋಜನೆ ಗಾಂಧಿ ಯೋಜನೆ.
  • 1945 ರಲ್ಲಿ ಎಂ.ಎನ್.ರಾಯ್‌ ರವರು ಆರಂಭಿಸಿದ ಯೋಜನೆ ಜನತಾ ಯೋಜನೆ.
  • 1950 ರಲ್ಲಿ ಜಯಪ್ರಕಾಶ ನಾರಾಯಣರವರು ಆರಂಭಿಸಿದ ಯೋಜನೆ ಜನತಾ ಯೋಜನೆ
  • 1938 ರಲ್ಲಿ ಜವಹಾರ್‌ ಲಾಲ್‌ ನೆಹರೂರವರು ರಾಷ್ಟ್ರೀಯ ಯೋಜನಾ ಸಮಿತಿಯನ್ನು ಸ್ಥಾಪಿಸಿದರು.

1 ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಜವಹಾರ್‌ ಲಾಲ್‌ ನೆಹರು
  • ಉಪಾಧ್ಯಕ್ಷರು – ಗುಲ್ಜರಿಲಾಲ ನಂದಾ
  • ಆದ್ಯತೆ – ಕೃಷಿ
  • ಮೊತ್ತ – 2378 ಕೋಟಿ
  • ವೆಚ್ಚ – 1960 ಕೋಟಿ
  • ಈ ಯೋಜನೆಯಲ್ಲಿ ಜಿ.ಡಿ.ಪಿ.ದರವನ್ನು 2.1% ನಿರೀಕ್ಷಿಸಲಾಗಿತ್ತು. ಆದರೆ ಸಾಧಿಸಿದ್ದು 3.6%
  • ಈ ಯೋಜನೆಯಲ್ಲಿ ಶಿಶುಗಳ ಮರಣ ದರ ಪ್ರಮಾಣವನ್ನು ಕಡಿಮೆ ಮಾಡಲಾಯಿತು.
  • ಆಹಾರ ಧಾನ್ಯಗಳು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು.
  • 1951 ಜೂನ್‌ 18 ರಂದು ಪ್ರಥಮ ತಿದ್ದುಪಡಿ ಮಾಡಿ ಭೂಸುದಾರಣೆ ಕಾರ್ಯಕ್ರಮ ಅಳವಡಿಸಲಾಯಿತು.
  • 1952 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆಯಿತು.
  • 1952 ರಲ್ಲಿ ಭಾರತ ದೇಶವು ಪ್ರಪಂಚದಲ್ಲಿ ಪ್ರಥಮ ಬಾರಿಗೆ ಕುಡುಂಬ ಯೋಜನೆ ಅಳವಡಿಸಿಕೊಂಡಿತು.
  • ಭಾರತದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು 1952 ರಲ್ಲಿ ಪ್ರಥಮವಾಗಿ ಆರಂಭಿಸಿದ ಕಾರ್ಯಕ್ರಮ ಸಮುದಾಯ ಅಭಿವೃದ್ದಿ ಕಾರ್ಯಕ್ರಮ.
  • ಈ ಯೋಜನೆಯಲ್ಲಿ ಜಮೀನ್ದಾರಿ ಪದ್ದತಿಯನ್ನು ನಿರ್ಮೂಲನೆಮಾಡುವ ಕಾನೂನನ್ನು ಜಾರಿಗೊಳಿಸಲಾಯಿತು.
  • ಈ ಯೋಜನೆಯನ್ನು ಹೆರಾಲ್ಡ್‌ ಡ್ಯೂಮರ್‌ ಮಾದರಿ ಪಂಚವಾರ್ಷಿಕ ಯೋಜನೆ ಎನ್ನುವರು.

2ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಜವಹಾರ್‌ ಲಾಲ್‌ ನೆಹರು
  • ಉಪಾಧ್ಯಕ್ಷರು – ಟಿ.ಟಿ.ಕೃಷ್ಣಮಾಚಾರಿ
  • ಆದ್ಯತೆ – ಕೈಗಾರಿಕೆ
  • ಈ ಯೋಜನೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಆಹಾರದ ಸಮಸ್ಯೆ ಮತ್ತು ಹಣದುಬ್ಬರ ಸಮಸ್ಯೆಯನ್ನು ಕಾಣಲಾಯಿತು.
  • 1957 ರಲ್ಲಿ ಹೋಮಿ ಜಹಂಗೀರ್‌ ಬಾಬಾರವರು ಅಣುಶಕ್ತಿ ಆಯೋಗ ಸ್ಥಾಪಿಸಿದರು.
  • ಈ ಯೋಜನೆಯನ್ನು ಕೈಗಾರಿಕೆ ಮತ್ತು ಸಾರಿಗೆ ಯೋಜನೆ ಎಂದು ಕರೆಯುತ್ತಾರೆ.
  • ಈ ಯೋಜನೆಯನ್ನು ಪಿ.ಸಿ. ಮಹಲ್ ನೀಬಿಸ್‌ ನ ಮಾದರಿ ಪಂಚವಾರ್ಷಿಕ ಯೋಜನೆ ಎನ್ನುವರು.
  • ಈ ಯೋಜನೆಯಲ್ಲಿ ಪ್ರಮುಖವಾದ 3 ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು.
  • ರೂರ್ಕೆಲಾ – ಓಡಿಸ್ಸಾ – ಪಶ್ಚಿಮ ಜರ್ಮನ್‌ ಸಹಯೋಗದೊಂದಿಗೆ
  • ಬಿಲಾಯಿ – ಛತ್ತಿಸಗಢ – ರಷ್ಯಾ ಸಹಯೋಗದೊಂದಿಗೆ
  • ದುರ್ಗಾಪುರ – ಪಶ್ಚಿಮ ಬಂಗಾಳ – ಇಂಗ್ಲೆಂಡ್‌ ಸಹಯೋಗದೊಂದಿಗೆ

3ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಜವಹಾರ್‌ ಲಾಲ್‌ ನೆಹರು
  • ಉಪಾಧ್ಯಕ್ಷರು – ಸಿ.ಎಂ.ತ್ರಿವೇದಿ
  • ಆದ್ಯತೆ – ಸಾರಿಗೆ ಸಂಪರ್ಕ
  • ಈ ಯೋಜನೆಯಲ್ಲಿ ಜಾರ್ಖಂಡದ ಬೋಕಾರೋದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು.
  • 1966 ಜನವರಿ 11 ಲಾಲ್‌ ಬಹದ್ದೂರ್‌ ಶಾಸ್ತ್ರಿ ಮರಣ
  • ತಾಷ್ಕೆಂಟ್‌ ಎಂಬ ಸ್ಥಳವು ರಷ್ಯಾದಲ್ಲಿದೆ. ಇದು ಭಾರತದ ಮತ್ತು ಪಾಕಿಸ್ತಾನದ ಭೂ ದೇಶಗಳ ನಡುವೆ ಭೂ ವಿವಾದದ ಒಪ್ಪಂದವಾಗಿದೆ.
  • ಈ ಒಪ್ಪಂದದಲ್ಲಿ ಬಾಗವಹಿಸಿದ ಬಾರತದ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಪಾಕಿಸ್ತಾನದ ಅಧ್ಯಕ್ಷ ಆಯೂಬ್‌ ಖಾನ್‌
  • ಈ ಅವಧಿಯಲ್ಲಿ ಭಾರತ ದೇಶದಲ್ಲಿ ಮಾನ್ಸೂನ್‌ ಮಾರುತಗಳು ಕೈಕೊಟ್ಟಿದ್ದರಿಂದ ಭಾರತದಲ್ಲಿ ಆಹಾರ ಸಮಸ್ಯೆ ತಲೆದೋರಿತು.
  • ಭಾರತದಲ್ಲಿ 1965 ರಲ್ಲಿ ಕ್ಷೀರಕ್ರಾಂತೀಯ ಪಿತಾಮಹನಾದ ವರ್ಗೀಸ್‌ ಕುರಿಯನ್‌ ರವರು ಗುಜರಾತ್‌ ರಾಜ್ಯದಲ್ಲಿ ಆನಂದ ಹೆಸರಿನಲ್ಲಿ ರಾಷ್ಟ್ರೀಯ ಹೈನುಗಾರಿಕೆ ಮಂಡಳಿ ಸ್ಥಾಪಿಸಿದರು.
  • 1966-1969 ಇದನ್ನು ಪಂಚವಾರ್ಷಿಕ ಯೋಜನೆಗಳ ಮೊದಲ ರಜಾ ಅವಧಿ ಎನ್ನುವರು.
  • ಇದನ್ನು ಹಸಿರು ಕ್ರಾಂತಿಯ ಅವಧಿ ಎನ್ನುವರು.
  • ಹಸಿರು ಕ್ರಾಂತಿಯಿಂದ ಅತಿ ಹೆಚ್ಚು ಲಾಭ ಪಡೆದ ಭಾರತದ 2 ರಾಜ್ಯಗಳು ಪಂಜಾಬ್‌ ಮತತು ಹರಿಯಾಣ.
  • ಹಸಿರು ಕ್ರಾಂತಿಯಿಂದ ಅತಿ ಹೆಚ್ಚು ಲಾಭ ಪಡೆದ ದಕ್ಷಿಣ ಬಾರತದ ರಾಜ್ಯವೆಂದರೆ ಆಂಧ್ರಪ್ರದೇಶ.

4ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಇಂದಿರಾಗಾಂಧಿ
  • ಉಪಾಧ್ಯಕ್ಷರು – ಡಾ|| ಡಿ.ಆರ್.ಗಾಡ್ಗಿಲ್‌
  • ಆದ್ಯತೆ – ಸ್ಥಿರತೆಯೊಂದಿಗೆ ಬೆಳವಣಿಗೆ
  • 1969 ಜುಲೈ 19 ರಂದು ಮೂಲ ಬಂಡವಾಳ 50 ಕೋಟಿ ಹೊಂದಿರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.
  • ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳ ಮೇಲೆ ಸರ್ಕಾರವು ಕೊಡುವ ಪರಿಹಾರ ನಿಧಿಯನ್ನು ಬೇಳೆ ವಿಮೆಯನ್ನು ಜಾರಿಗೊಳಿಸಲಾಯಿತು.
  • 1971 ಡಿಸೆಂಬರ್‌ 16ರ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶವೆಂದು ವಿಮೋಚನೆಗೊಳಿಸಲಾಯಿತು.
  • 1973 ರಲ್ಲಿ ಬರಪೀಡಿತ ಪ್ರದೇಶಗಳಿಗೆ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
  • 1974 ಮೆ 18 ರಂದು ರಾಜಸ್ತಾನದ ಪ್ರೋಖ್ರಾನ್‌ ಎಂಬ ಸ್ಥಳದಲ್ಲಿ ಸ್ಮೈಲಿಂಗ್‌ ಬುದ್ದ ಅಥವಾ ನಗುವ ಬುದ್ದ ಎಂಬ ಅಣು ಪರೀಕ್ಷೆ ಮಾಡಲಾಯಿತು.
  • ಈ ಯೋಜನೆಯನ್ನು ಡಿ.ಆರ್.‌ಗಾಡ್ಗಿಲ್‌ ರವರ ಮಾದರಿಯ ಪಂಚವಾರ್ಷಿಕ ಯೋಜನೆ ಎನ್ನುವರು.

5ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಇಂದಿರಾಗಾಂಧಿ
  • ಉಪಾಧ್ಯಕ್ಷರು – ಪಿ.ಎನ್.ಹಕ್ಸಾರ್‌
  • ಆದ್ಯತೆ – ಬಡತನ ನಿರ್ಮೂಲನೆ
  • 1974 ರಲ್ಲಿ ಅಗತ್ಯ ಅಂಶಗಳನ್ನು ಜಾರಿಗೊಳಿಲಾಯಿತು.
  • 1975ರಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಯಿತು.
  1. ಉಳುವವನೆ ಭೂಮಿಯ ಒಡೆಯ
  2. ಗರಿಬಿ ಹಟಾವೊ
  3. ಪ್ರಾದೇಶಿಕ ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ ಸ್ಥಾಪಿಸಲಾಯಿತು
  4. ಕೂಲಿಗಾಗಿ ಕಾಳು ಯೋಜನೆ
  5. ಜೀತಪದ್ದತಿ ವಿಮುಕ್ತ ಕಾಯ್ದೆ ಕಾನೂನು ಜಾರಿಗೊಳಿಸಲಾಯಿತು(1976)
  6. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಲಾಯಿತು(1976)

6ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಇಂದಿರಾಗಾಂಧಿ
  • ಉಪಾಧ್ಯಕ್ಷರು – ಎನ್.ಡಿ.ತಿವಾರಿ
  • ಆದ್ಯತೆ – ಸ್ವಾವಲಂಬನೆ, ಗ್ರಾಮೀಣಾಭಿವೃದ್ದಿ ಮತ್ತು ಬಡತನ ನಿರ್ಮೂಲನೆ
  • 1980 ಏಪ್ರಿಲ್‌ 15 ರಂದು ಮೂಲ ಬಂಡವಾಳ 200ಕೋಟಿ ಹೊಂದಿರುವ 6 ಬ್ಯಾಂಕ್ಗಳನ್ನು ಮತ್ತೇ ರಾಷ್ಟ್ರೀಕರಣಗೊಳಿಸಿದರು.
  • 1982 ಜುಲೈ 12 ರಂದು ಕೆ. ಶಿವರಾಮನ್‌ ಸಮಿತಿಯ ಶಿಫಾರಸ್ಸಿನ ಮೇರೆಗೆ ನಬಾರ್ಡ್‌ ಬ್ಯಾಂಕ್‌ ಸ್ಥಾಪಿಸಲಾಯಿತು.
  • 1982 ರಲ್ಲಿ Exim ಬ್ಯಾಂಕ್‌ ನ್ನು ಸ್ಥಾಪಿಸಲಾಯಿತು.
  • 1984 ಅಕ್ಟೋಬರ್‌ 31 ರಂದು ಇಂದಿರಾಗಾಂಧಿ ಮರಣ ಹೊಂದಿದರು.

7ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ರಾಜೀವಗಾಂಧಿ
  • ಉಪಾಧ್ಯಕ್ಷರು – ಮನಮೋಹನ್‌ ಸಿಂಗ್‌
  • ಆದ್ಯತೆ – ಆಹಾರ ಧಾನ್ಯಗಳ ಉತ್ಪಾದನೆ
  • 1985 ರಲ್ಲಿ ಇಂದಿರಾಗಾಂಧಿ ಆವಾಸ ಯೋಜನೆ ಸ್ಥಾಪಿಸಲಾಯಿತು.
  • 1986 ರಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರು.
  • 1989 ರಲ್ಲಿ 61ನೇ ತಿದ್ದುಪಡಿ ಮೂಲಕ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲಾಯಿತು.
  • ಈ ಅವಧಿಯಲ್ಲಿದ್ದ ಪ್ರಧಾನಿ – ಪಿ.ವಿ.ನರಸಿಂಹರಾವ್‌
  • ಹಣಕಾಸು ಸಚಿವರು – ಮನಮೋಹನ್‌ ಸಿಂಗ್‌
  • 1991 ಜುಲೈ 24 ಭಾರತದಲ್ಲಿ ಹೊಸ ಕೈಗಾರಿಕಾ ನೀತಿಗಳಾದ ಎಲ್.ಪಿ.ಜಿ.ಯನ್ನು ಜಾರಿಗೊಳಿಸಲಾಯಿತು.
  • ದಕ್ಷಿಣ ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಚಾಣಕ್ಯ ಎಂದು ಪಿ.ವಿ.ನರಸಿಂಹರಾವರನ್ನು ಕರೆಯುತ್ತಾರೆ.
  • ಆಧುನಿಕ ಭಾರತದ ಕೈಗಾರಿಕಾ ನೀತಿಯ ಪಿತಾಮಹಾ – ಸರ್.ಎಂ.ವಿಶ್ವೇಶ್ವರಯ್ಯ

8ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಪಿ.ವಿ.ನರಸಿಂಹರಾವ್‌
  • ಉಪಾಧ್ಯಕ್ಷರು – ಪ್ರಣಬ್‌ ಮುಖರ್ಜಿ
  • ಆಧ್ಯತೆ – ಮಾನವ ಸಂಪನ್ಮೂಲ
  • 1995 ಜನವರಿ 1ರಲ್ಲಿ ಭಾರತವು WTO ದ ಸದಸ್ಯತ್ವವನ್ನು ಪಡೆದುಕೊಂಡಿತು.
  • 1995 ರಲ್ಲಿ ಅಮರ್ತ್ಯಸೇನರವರು ಭಾರತದಲ್ಲಿ ಪ್ರಥಮ ಬಾರಿಗೆ HDI ನ್ನು ಅಳತೆ ಮಾಡಿದರು.

9ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಪಿ.ವಿ.ನರಸಿಂಹರಾವ್‌
  • ಉಪಾಧ್ಯಕ್ಷರು – ಮಧುದಂಡವತೆ
  • ಆದ್ಯತೆ – ಸಾಮಾಜಿಕ ನ್ಯಾಯ ಮತ್ತು ಸಮಾನತೆಯೊಂದಗಿನ ಆರ್ಥಿಕ ಬೆಳವಣಿಗೆ
  • 1997 ರಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ. ಇದು ನಗರ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಯೋಜನೆಯಾಗಿದೆ.
  • 1999 ರಲ್ಲಿ ಸ್ವರ್ಣ ಜಯಂತಿ ಗ್ರಾಮೀಣ ರೋಜಗಾರ ಯೋಜನೆ. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಯೋಜನೆಯಾಗಿದೆ.
  • 1999 ರಲ್ಲಿ ಭಾರತ ಮತ್ತು ಪಾಕಿಸ್ತಾನ ಜೊತೆ ಕಾರ್ಗಿಲ್‌ ಯುದ್ದ ಸಂಭವಿಸಿತು.
  • ಭಾರತವು ಪಾಕಿಸ್ತಾನವನ್ನು ಸೋಲಿಸಿ 1999 ಜುಲೈ 26 ರಂದು ಕಾರ್ಗಿಲ್‌ ವಶಪಡಿಸಿಕೊಂಡು ವಿಜಯೋತ್ಸವವನ್ನು ಆಚರಿಸಿಕೊಂಡಿತು. ಆಗಿದ್ದ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ, ರಾಷ್ಟ್ರಪತಿ – ಕೆ.ಆರ್‌ ನಾರಾಯಣ್.‌
  • 1999 ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ರವರ ಅವಧಿಯಲ್ಲಿ ಪ್ರಮುಖವಾದ 4 ನಗರಗಳಾದ ದೆಹಲಿ, ಕೋಲ್ಕತ್ತಾ, ಚೆನೈ, ಮುಂಬೈ, ನಗರಗಳಿಗರ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಕೋನ ಯೋಜನೆಯನ್ನು ಜಾರಿಗೊಳಿಲಾಯಿತು.
  • ಡಿಸೆಂಬರ್‌ 25,2000 ರಲ್ಲಿ ಕಚ್ಚಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿಸಿ ಮುಖ್ಯವಾದ ರಸ್ತೆಗಳಿಗೆ ಸೇರಿಸುವ ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯ ಉದ್ದೇಶವಾಗಿದೆ.
  • 2001 ರಲ್ಲಿ ಸಾಕ್ಷರತೆಯನ್ನು ಹೆಚ್ಚಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು ಜಾರಿಗೊಳಿಸಲಾಯಿತು.
  • ಡಿಸೆಂಬರ್‌ 25, 2002 ರಂದು ಅಂತ್ಯೋದಯ ಅನ್ನಯೋಜನೆ ಜಾರಿಗೊಳಿಸಲಾಯಿತು.

10 ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಅಟಲ್‌ ಬಿಹಾರಿ ವಾಜಪೇಯಿ
  • ಉಪಾಧ್ಯಕ್ಷರು – ಕೆ.ಸಿ.ಪಂತ್‌
  • ಆದ್ಯತೆ – ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಆರ್ಥಿಕ ಬೆಳವಣಿಗೆ
  • 2002 ರಲ್ಲಿ 86ನೇ ತಿದ್ದುಪಡಿ ಪ್ರಕಾರ 6ರಿಂದ 14 ವರ್ಷದ ಒಳಗಿನ ಮಕ್ಕಿಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 21(ಎ) ಮತ್ತು ಪೋಷಕರ ಮೂಲಭೂತ ಕರ್ತವ್ಯವಾಗಿ 51(ಎ)ಕೆ ಯಲ್ಲಿ ಸೇರಿಸಲಾಯಿತು. ಇದು 11ನೇ ಮೂಲಭೂತ ಕರ್ತವ್ಯವಾಗಿದೆ.
  • 2005 ರಲ್ಲಿ ಭಾರತ ನಿರ್ಮಾಣ ಎಂಬ ಯೋಜನೆ ಜಾರಿಗೊಳಿಸಲಾಯಿತು. ಈ ಯೋಜನೆ 2005 ರಿಂದ 2009 ರ ವರೆಗೆ ಜಾರಿಯಲ್ಲಿತ್ತು.
  • ಭಾರತ ನಿರ್ಮಾಣ ಯೋಜನೆ ಪ್ರಮುಖವಾದ 6 ಕ್ಚೇತ್ರಗಳ ಅಭಿವೃದ್ದಿಗೆ ಆಧ್ಯತೆ ನೀಡಿತು. ಅವುಗಳೆಂದರೆ ಗ್ರಮೀಣ ರಸ್ತೆ, ಗ್ರಾಮೀಣವಸತಿ, ಗ್ರಾಮೀಣ ಸಾರಿಗೆ ಸಂಪರ್ಕ, ಗ್ರಾಮೀಣ ನೀರಾವರಿ, ಗ್ರಾಮೀಣ ವಿದ್ಯುಚ್ಛಕ್ತಿ, ಗ್ರಾಮೀಣ ಕುಡಿಯುವ ನೀರು.
  • 2005 ರಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಧಿನಿಯಮವನ್ನು ಜಾರಿಗೊಳಿಸಿ 2006 ಫೆಬ್ರವರಿ 2 ರಂದು ಉತ್ತರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಯೋಜನೆ ಪ್ರಾರಂಭವಾಯಿತು.
  • ನರೇಗಾ – ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

11ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಮನಮೋಹನ್‌ ಸಿಂಗ್‌
  • ಉಪಾಧ್ಯಕ್ಷರು – ಮೌಟೆಂಕ್‌ ಸಿಂಗ್‌ ಅಹ್ಲುವಾಲಿಯಾ
  • ಆದ್ಯತೆ – ತ್ವರಿತಗತಿ ಅಥವಾ ಶೀಘ್ರಗತಿಯ ಆರ್ಥಿಕ ಬೆಳವಣಿಗೆ
  • 2008 ರಲ್ಲಿ ಕರ್ನಾಟಕವು ಎಲ್ಲಾ ಜಿಲ್ಲೆಗಳಲ್ಲಿ ನರೇಗಾವನ್ನು ಜಾರಿಗೊಳಿಸಲಾಯಿತು.
  • 2009 ಅಕ್ಟೋಬರ್‌ 2 ರಂದು ನರೇಗಾವನ್ನು ಎಮ್.ಜಿ.ನರೇಗಾ ಎಂದು ಪುನರ್‌ ಎಂದು ಪುನರ್‌ ನಾಮಕರಣ ಮಾಡಲಾಯಿತು.
  • ಈ ಯೋಜನೆಯಲ್ಲಿ 70 ಮಿಲಿಯನ್‌ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಯಿತು.
  • ಈ ಯೋಜನೆಯಲ್ಲಿ ಪ್ರಮುಖವಾದ ವರಮಾನ, ಶಿಕ್ಷಣ, ಮಕ್ಕಳ ಮತ್ತು ಮಹಿಳೆಯರ ಲಿಂಗಾನುಪಾತ ಮೂಲ ಸೌಕರ್ಯಗಳು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಈ ಕ್ಚೇತ್ರಗಳ ಅಭಿವೃದ್ದಿ ಮಾಡಲು ಆದ್ಯತೆ ನೀಡಲಾಯಿತು.

12ನೇ ಪಂಚವಾರ್ಷಿಕ ಯೋಜನೆ :

  • ಅಧ್ಯಕ್ಷರು – ಮನಮೋಹನ್‌ ಸಿಂಗ್‌
  • ಉಪಾಧ್ಯಕ್ಷರು – ಮೌಟೆಂಕ್‌ ಸಿಂಗ್‌ ಅಹ್ಲುವಾಲಿಯಾ
  • ಆದ್ಯತೆ – ಭ್ರಷ್ಟಾಚಾರ ನಿರ್ಮೂಲನೆ, ವಿದ್ಯಾಭ್ಯಾಸ ಮತ್ತು ಆರೋಗ್ಯ
  • ಈ ಯೋಜನೆಯಲ್ಲಿ ಜಿ.ಡಿ.ಪಿ. 8% ಕ್ಕೆ ಏರಿಕೆ ಮಾಡಲಾಗುವುದು.
  • ಕೃಷಿ ಜಿ.ಡಿ.ಪಿ.ದರವನ್ನು ಶೇ 4 ಕ್ಕೆ ಏರಿಸಲಾಯಿತು.
  • ಕೈಗಾರಿಕಾ ವಲಯದ ಜಿ.ಡಿ.ಪಿ. ದರವನ್ನು ಶೇ 7.6 ಕ್ಕೆ ಏರಿಸಲಾಗುವುದು
  • ಸೇವಾವಲಯದ ಜಿ.ಡಿ.ಪಿ. ದರವನ್ನು ಶೇ 9 ಕ್ಕೆ ಏರಿಸಲಾಗುವುದು.
  • ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು.
  • ಸಾಕ್ಷರತೆಯನ್ನು ಹೆಚ್ಚಿಸಲಾಗುವುದು.
  • ಮಕ್ಕಳ ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತವನ್ನು 950ಕ್ಕೆ ಏರಿಸಲಾಗುವುದು.
  • ಈ ಯೋಜನೆ ಮುಗಿಯುದರೊಳಗೆ ಎಲ್ಲಾ ಗ್ರಾಮಗಳಿಗೆ ರಸ್ತೆ ಮತ್ತು ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಯಿತು.

FAQ :

6ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 21(ಎ) ಗೆ ಮೂಲಭೂತ ಹಕ್ಕನಾಗಿ ಎಷ್ಟನೇ ಪಂಚವಾರ್ಷಿಕ ಯೋಜನೆಯಲ್ಲಿ ತರಲಾಯಿತು?

10ನೇ ಪಂಚವಾರ್ಷಿಕ ಯೋಜನೆ

1 ನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷ ಯಾರು?

ಜವಹಾರ್‌ ಲಾಲ್‌ ನೆಹರು

ಇತರೆ ವಿಷಯಗಳು :

ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ

Join WhatsApp Join Telegram

ಪ್ಲಾಸಿ ಕದನದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.